Sunday, January 23, 2011

ಜೇನು ಕುರುಬರು

ಜೇನು ಕುರುಬರು ಕರ್ನಾಟಕದಲ್ಲಿ ನೆಲೆಗೊಂಡ ಜನರಲ್ಲಿ ಮೊದಲಿಗರು. ಇವರಿಗೆ ಸಾವಿರಾರು ವರುಷಗಳ ಇತಿಹಾಸವಿದೆ, ಹಾಗು ನೂರಾರು ವರುಷಗಳಿಂದ ಇವರು ಜೀವನ ಸಾಗಿಸುವ ರೀತಿ ಬದಲಾಗದೆ ಹಾಗೆ ಉಳಿದುಕೊಂಡು ಬಂದಿದೆ. ಕರ್ನಾಟಕದ ಇಂದಿನ ನಮಗೆಲ್ಲ ಈ ಜೇನು ಕುರುಬರೆ ಪೂರ್ವಿಕರೆಂದರೆ ಅತ್ಹಿಶೋಕ್ಥಿಯಗಲಾರದು. ಇವರ ಹೆಸರೇ ಹೇಳುವಂತೆ ಕುರುಬ ಎಂದರೆ ಹುಡುಕುವವನು, ಜೇನು ಕುರುಬ ಎಂದರೆ ಜೇನನ್ನು ಹುಡುಕುವವನು. ಇವರು ಕಾಡನ್ನೇ ನಂಬಿ, ಅದರಲ್ಲಿ ಸಿಗುವ ಪಧಾರ್ಥಗಳನ್ನು ಸವಿಸಿ ಬಾಳುವವರು. ಮಾನವನು ಹಳ್ಳಿಗಳಲ್ಲಿ ನೆಲೆಸುವ ಮೊದಲು ಹೇಗೆ ಕಾಡುಗಳಲ್ಲಿ ಆಲಿದು, ಭೇಟೆ ಆಡಿ ಬತುಕುತಿದ್ದನೂ ಆದನ್ನು ಜೇನು ಕುರುಬರು ಇನ್ನು ಮಾಡಿಕೊಡು ಬರುತಿದ್ದಾರೆ ಹಾಗು ನೆಮ್ಮದಿಯ ಬಾಳ್ವೆ ಮಾಡುತಿದ್ದಾರೆ. ಇವರಿಗೆ ಕಾಡನ್ನು ಬಿಟ್ಟು ನಾಡಿಗೆ ಬರಬೇಕು ಎಂಬ ಯೋಚನೆಯೇ ಇಲ್ಲ, ಇಂದಿನ ಕಂಪ್ಯೂಟರ್ ಯುಗದಲ್ಲಿ, ತಮ್ಮ ಬಳಿ ಆಧುನಿಕ ಬದುಕಿಗೆ ಬೇಕಾದ ಯಹುದೇ ವಸ್ತುಗಲಿಲ್ಲದೆ ಮತ್ತು ಅವಕ್ಕೆ ಆಸೆ ಪಡದೆ ಮುಗ್ದ ಜೀವನವನ್ನು ನಡಿಸಿಕೊಂಡು ಬಂದವರು. ಇವರಿಗೆ ಮಲೈ ಮಾದೆಶ್ವರನೆ ಕುಲ ದೇವರು. ಇವರು ಇಂದಿನ ಮೈಸೂರು  ಹಾಗು ಚಾಮರಾಜನಗರ ಜಿಲ್ಲೆಯ ಕಾಡುಗಳಲ್ಲಿ ವಾಸಿಸುತ್ತಾರೆ. ಆದರೆ ಕರ್ನಾಟಕ ಸರ್ಕಾರ ಕಾಡಿನಲ್ಲಿ ವಾಸಿಸುವ ಜನರನ್ನು ನಾಡಿಗೆ ತಂದು ನೆಲಸಿಸುವ ಯೋಜನೆಯಡಿ ತುಂಬ ಜನ ಕಾಡು ಕುರುಬರು, ಸೋಲಿಗರು ಹಾಗು ಜೇನು ಕುರುಬರನ್ನು ತಾವೇ ಸಾವಿರಾರು ವರುಷಗಳಿಂದ ವಾಸಿಸುತಿದ್ದ ಕಾಡುಗಳಿಂದ ವಕ್ಕಲೆಬಿಸುತಿದ್ದಾರೆ. ಜೇನು ಕುರುಬರು ಆನೆಗಳನ್ನು ಪಳಗಿಸುವುದರಲ್ಲಿ ನಿಪುಣರು, ತುಂಬ ಜನ ಜೇನು ಕುರುಬರು ಮಾವುತರಾಗಿ ದಸರಾ ಹಬ್ಬದ ಸಮಯ ಪಲ್ಗೊಳುತ್ತಾರೆ, ಹಾಗು ಕರ್ನಾಟಕ ಅರಣ್ಯ ಇಲಾಕೆಯಲ್ಲಿ ಕಾಡಿನ ರಕ್ಷಣೆಗೆ ಕೆಲಸಕ್ಕೆ ಸೇರಿದ್ದಾರೆ.

No comments:

Post a Comment